ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದಜೀ ಮುತಾಲಿಕರಿಗೆ “ಹಿಂದೂ ಭಾಸ್ಕರ” ಪ್ರಶಸ್ತಿ ಪ್ರದಾನ ****************************************** ಮೂಡಲಗಿ: ಗುರುವನ್ನು ಗೌರವಿಸುವಂತಹ ಪರಂಪರೆ ನಮ್ಮ ನೆಲದ ಗುಣ, ಶಿಕ್ಷಣದಿಂದ ಸದೃಢ ಸಮಾಜ ನಿರ್ಮಾಣವಾಗಬೇಕಿದೆ. ಈ ನಿಟ್ಟಿನಲ್ಲಿ ನಿಜಗುಣ ದೇವರು ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಅಧ್ಯಾತ್ಮಿಕತೆಯ ಜೊತೆಗೆ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಶ್ರೀರಾಮ ಸೇನಾ ಸಂಸ್ಥಾಪಕರಾದ ಪ್ರಮೋದಜೀ ಮುತಾಲಿಕ ಹೇಳಿದರು. ಅವರು ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಶ್ರೀ ನಿಜಗುಣ ದೇವರ ವಿದ್ಯಾಸಂಸ್ಥೆಯ 25ನೇ ವರ್ಷದ ಬೆಳ್ಳಿ ಹಬ್ಬದ ಸಮಾರಂಭ ಹಾಗೂ ಶ್ರೀ ಸಿದ್ಧಲಿಂಗೇಶ್ವರ …
Read More »Belagavi Times
ಲಿಂಗೈಕ್ಯ ಶಿವರುದ್ರೇಶ್ವರ ಮಹಾಸ್ವಾಮಿಗಳ ೨೪ನೇ ಪುಣ್ಯಸ್ಮರಣೆ
ಘಟಪ್ರಭಾ: ಇಲ್ಲಿನ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿಮಠದ ಪ್ರಥಮ ಪೀಠಾಧ್ಯಕ್ಷರಾಗಿದ್ದ ಲಿಂಗೈಕ್ಯ ಶಿವರುದ್ರೇಶ್ವರ ಮಹಾಸ್ವಾಮಿಗಳ ೨೪ನೇ ಪುಣ್ಯಸ್ಮರಣೆ ದಿ.೨೪ ರಂದು ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದಲ್ಲಿ ನಡೆಯಲಿದ್ದು. ಪುಣ್ಯಸ್ಮರಣೆಯ ಅಂಗವಾಗಿ ಕೃರ್ತು ಗದ್ದುಗೆಗೆ ಹಾಗೂ ಶಿರುದ್ರೇಶ್ವರರ ಸಮಾಧಿಗೆ ವಿಶೇಷ ಪೂಜೆ ಹಾಗೂ ಮಧ್ಯಾಹ್ನ ಮಹಾಪ್ರಸಾದ ನಡೆಯಲಿದ್ದು ಭಕ್ತಾಧಿಗಳು ಪ್ರಸಾಧ ಸ್ವೀಕರಿಸಬೇಕೆಂದು ಶ್ರೀ ಮಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Read More »ಎನ್.ಎಸ್.ಹರ್ಡೀಕರ ಸೇವಾದಳದ ತರಭೇತಿ ಕೇಂದ್ರದಲ್ಲಿ ಮಹಿಳೆಯರ ಏಕವ್ಯಕ್ತಿ ನಾಟಕ ಶಿಬಿರ
ಘಟಪ್ರಭಾ: ಇಂದು ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿ ಬಂದಿದೆ. ಆದರೆ ಅಲ್ಲಿಯೂ ಕುಟುಂಬ ರಾಜಕಾರಣ ನಡೆಯುತಿರುವುದರಿಂದ ಮಹಿಳೆಯರಿಗೆ ಮನ್ನಣೆ ಇಲ್ಲದಂತಾಗಿದೆ. ಅಂಥ ಸಂದರ್ಭದಲ್ಲಿ ಸಾಮಾನ್ಯ ಮಹಿಳೆಯರಿಗೆಲ್ಲಿ ಅವಕಾಶ ಸಿಗುತ್ತದೆ ಹಾಗಾಗಿ ಇಂದು ಮೀಸಲಾತಿಯನ್ನೇ ಮರು ಚಿಂತನೆಗೆ ಒಳಪಡಿಸಬೇಕಾದ ಅಗತ್ಯವಿದೆ ಎಂದು ಲೇಖಕಿ ಹಂಪಿ ವಿವಿಯ ವಿಶ್ತಾಂತ ಕುಲಪತಿ ಡಾ. ಮಲ್ಲಕಾ ಘಂಟಿ ಅಭಿಪ್ರಾಯಪಟ್ಟರು. ಅವರು ಗುರುವಾರ ರಂದು ಘಟಪ್ರಭಾದ ಎನ್.ಎಸ್.ಹರ್ಡೀಕರ್ ಸೇವಾದಳದಲ್ಲಿ ಕರ್ನಾಟಕ ಲೇಖಿಕಿಯರ ಸಂಘ ಮತ್ತು ಕರ್ನಾಟಕ ಲೇಖಿಕಿಯರ ಸಂಘ ಬೆಳಗಾವಿ ಜಿಲ್ಲಾ ಶಾಖೆ ಹಾಗೂ ಮಾನವ ಬಂಧುತ್ವ ವೇದಿಕೆಯ ಸಹಯೋಗದಲ್ಲಿ ನಡೆದ ಸಮುದ್ರದ …
Read More »ಉತ್ತಮ ಕಲಿಕೆ ಹಾಗೂ ಅಭ್ಯಾಸವನ್ನು ಮಾಡುವುದರಿಂದ ಸಮಾಜಮುಖಿ ಚಿಂತನೆಗಳನ್ನು ಹೊಂದಬಹುದು ಎಂದು ಶಿಕ್ಷಕ ಅನಿಲ್ ಬಂಡಾರಿ
ಘಟಪ್ರಭಾ: ಉತ್ತಮ ಕಲಿಕೆ ಹಾಗೂ ಅಭ್ಯಾಸವನ್ನು ಮಾಡುವುದರಿಂದ ಸಮಾಜಮುಖಿ ಚಿಂತನೆಗಳನ್ನು ಹೊಂದಬಹುದು ಎಂದು ಅಡಿವಿ ಸಿದ್ದೇಶ್ವರ ತೋಟ ನಾಗನೂರು ಶಾಲೆಯ ಶಿಕ್ಷಕರಾದ ಅನಿಲ್ ಬಂಡಾರಿ ಹೇಳಿದರು. ಅವರು ಗುರುವಾರ ಸಂಜೆ ಘಟಪ್ರಭಾ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜನತಾ ಪ್ಲಾಟ್ ಮಲ್ಲಾಪೂರ ಪಿಜಿ ಶಾಲೆಯ ಏಳನೇ ತರಗತಿಯ ಮಕ್ಕಳ ಬಿಳ್ಕೊಡುವ ಮತ್ತು ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸರಾಗಿ ಮಾತನಾಡಿದರು. ವಿದ್ಯುತ್ ಸಂಪರ್ಕವಿಲ್ಲದ ಕೊಳಗೇರಿಯಲ್ಲಿ ವಾಸವಾಗಿದ್ದ ಸೈಕಲ್ ರಿಕ್ಷಾ ಚಾಲಕನ ಮಗ ತನ್ನ ಮೊದಲ ಪ್ರಯತ್ನದಲ್ಲಿ 48ನೇ ರಾಂಕ್ ದೊಂದಿಗೆ 2006ರಲ್ಲಿ …
Read More »“ಮಕ್ಕಳಿಗಾಗಿ ಆಸ್ತಿ ಮಾಡದೇ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿರಿ” ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಸಿ-ಮುರುಘರಾಜೇಂದ್ರ ಶ್ರೀಗಳು
ಘಟಪ್ರಭಾ: ಶಿಕ್ಷಕರು ಮಕ್ಕಳಿಗೆ ಅಕ್ಷರ ಜ್ಞಾನದ ಜೊತೆಗೆ ಉತ್ತಮ ಸಂಸ್ಕಾರವನ್ನು ಕಲಿಸುವ ಮೂಲಕ ಸಮಾಜದ ಸ್ವಾಸ್ಥ್ಯಕ್ಕೆ ಶ್ರಮಿಸಬೇಕು. ಮತ್ತು ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡದೇ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿರಿ ಎಂದು ಗೋಕಾಕದ ಶೂನ್ಯ ಸಂಪಾದನಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು. ಅವರು ಶುಕ್ರವಾರದಂದು ಸಮೀಪದ ಶಿಂದಿಕುರಬೇಟ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಗಂಡು-ಹೆಣ್ಣು ಮಕ್ಕಳ ಶಾಲೆಯ 7ನೇ ವರ್ಗದ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಬಿಳ್ಕೋಡುವ ಸಮಾರಂಭ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಗುರುವನ್ನು ಗೌರವಿಸುವಂತಹ ಪರಂಪರೆ ನಮ್ಮ ನೆಲದ ಗುಣ, …
Read More »ಅಂಗನವಾಡಿ ಕಾರ್ಯಕರ್ತೆ’ಯರು, ‘ಸಹಾಯಕಿ’ಯರಿಗೆ ‘ಗ್ರಾಚುಟಿ ಸವಲತ್ತು’ ಜಾರಿ
ಬೆಂಗಳೂರು: ರಾಜ್ಯ ಸರ್ಕಾರದಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿರಯರಿಗೆ ಗ್ರಾಚ್ಯುಟಿ ಸವಲತ್ತು ಘೋಷಣೆ ಮಾಡಲಾಗಿದೆ. ಇಂದು ಬಜೆಟ್ ಮಂಡಿಸಿ ಮಾತನಾಡಿದಂತ ಸಿಎಂ ಸಿದ್ಧರಾಮಯ್ಯ ಅವರು, ರಾಜ್ಯದಲ್ಲಿ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 1000 ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳನ್ನು 200 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದರು. ಅಂಗನವಾಡಿ ಮೂಲಕ ಕೈಗೊಳ್ಳುವ ಚಟುವಟಿಕೆಗಳನ್ನು ಸುಗಮಗೊಳಿಸಲು 90 ಕೋಟಿ ರೂ ವೆಚ್ಚದಲ್ಲಿ 75,938 ಸ್ಮಾರ್ಟ್ ಪೋನ್ ಗಳನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಮೇಲ್ವಿಚಾರಕಿಯರಿಗೆ ಒದಗಿಸಲಾಗುವುದು ಎಂದರು. ವಿವಿಧ ಖಾಯಿಲೆಯಿಂದ ಬಳಲುತ್ತಿರುವಂತ ವ್ಯಕ್ತಿಗಳ ಆರೈಕೆದಾರರಿಗೆ ಪ್ರತಿ ತಿಂಗಳು 1000 ರೂ …
Read More »*21 ಟನ್ ಅಕ್ಕಿಯನ್ನು ಮರಳಿ ನೀಡಲು ಆದೇಶ ಹುಕ್ಕೇರಿ: 10/1/2024 ರಂದು ಸರ್ಕಾರದಿಂದ ಸಾರ್ವಜನಿಕರಿಗೆ ಹಂಚಿಕೆ*
21 ಟನ್ ಅಕ್ಕಿಯನ್ನು ಮರಳಿ ನೀಡಲು ಆದೇಶ ಹುಕ್ಕೇರಿ: 10/1/2024 ರಂದು ಸರ್ಕಾರದಿಂದ ಸಾರ್ವಜನಿಕರಿಗೆ ಹಂಚಿಕೆ ಮಾಡುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಲಾಸುತ್ತಿದ್ದ ಪ್ರಕರಣ ಈಗ ಅಂತ್ಯ ಹಾಡಿದೆ. ಹುಕ್ಕೇರಿ ನಿವಾಸ್ತಿ ರವಿ ಶಿವಾನಂದ ಗಜಬರ ಇವರಿಗೆ ಸಂಭಂದ ಪಟ್ಟ ಈ ಅಕ್ಕಿ ಲಾರಿ ಸಾಗಾಟನೆ ಲಾರಿಯನ್ನು ಆಹಾರ ಇಲಾಖೆ ಅಧಿಕಾರಿಗಳು ದಿನಾಂಕ 10/01/2024 ರಂದು/ವಶಪಡಿಸಿಕೊಂಡಿದ್ದರು ಇದರ ವಿಷವಾಗಿ ಹುಕ್ಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು ಈಗ ಮಾನ್ಯ ಉಪ ವಿಭಾಗಾಧಿಕಾರಿ ಬೆಳಗಾವಿ ಇವರು ಸೂಕ್ತವಾದ ದಾಖಲೆಗಳನ್ನು ಪರಿಶೀಲನೆ ಮಾಡಿ ಮಾನ್ಯ ನ್ಯಾಯಾಲಯ …
Read More »ಶ್ರೀ ಗ್ರಾಮ ದೇವತೆಯ ನೂತನ ದೇವಸ್ಥಾನದ ಕಳಸಾರೋಹಣ ಸಾವಿರಾರು ಜನ ಮಹಿಳೆಯರಿಂದ ಕುಂಭಮೇಳದ ಭವ್ಯ ಮೆರವಣಿಗೆ
ಘಟಪ್ರಭಾ: ಸಮೀಪದ ಶಿಂದಿಕುರಬೇಟ ಗ್ರಾಮದ ಶ್ರೀ ಗ್ರಾಮ ದೇವತೆ (ದ್ಯಾಮವ್ವ) ದೇವಿಯ ನೂತನ ದೇವಸ್ಥಾನದ ಉದ್ಘಾಟನಾ ಸಮಾರಂಭ ಹಾಗೂ ಕಳಸಾರೋಹಣ ಕಾರ್ಯಕ್ರಮವು ದಿ.13 ರಂದು ಜರುಗಿತು. ಬೆಳಿಗ್ಗೆ ಬ್ರಾಹ್ಮೀ ಮೂಹೂರ್ತದಲ್ಲಿ ನೂತನ ದೇವಾಲಯದಲ್ಲಿ ಗೋಮಾತೆ ಗೃಹ ಪ್ರವೇಶ, ನವಗ್ರಹ ಶಾಂತಿ ಗಾಯತ್ರಿ ಹೋಮ ಜರುಗಿತು. ಸಂಜೆ ಶ್ರೀ ಪರಮೇಶ್ವರ ಗುಡಿಯಿಂದ ಶ್ರೀ ಗ್ರಾಮದೇವತೆಯ (ದ್ಯಾಮವ್ವ) ದೇವಸ್ಥಾನದವರೆಗೆ ಕಳಶವನ್ನು ಸಾವಿರಾರು ಮಹಿಳೆಯರಿಂದ ಕುಂಭಮೇಳದ ಭವ್ಯ ಮೆರವಣಿಗೆ ಹಾಗೂ ವಿವಿಧ ಜಾನಪದ ಕಲಾ ವೈಭವದೊಂದಿಗೆ ಉತ್ಸವದಿಂದ ತರಲಾಯಿತು. ಸಂಜೆ ಮಹಾಪ್ರಸಾದ ಜರುಗಿತು.
Read More »Spa ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ : 6 ಜನ ಮಹಿಳೆಯರ ರಕ್ಷಣೆ.!
ಬೆಂಗಳೂರು : ಬೆಂಗಳೂರು ನಗರದ ವೈಟ್ಫೀಲ್ಡ್ ವಿಭಾಗದ ಪೊಲೀಸರು, ಸ್ಪಾ ಹೆಸರಿನಲ್ಲಿ ನಡೆಸುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮಾಡಿ ಇಬ್ಬರನ್ನು ಬಂಧಿಸಿ, ಆರು ಮಂದಿ ಮಹಿಳೆಯರನ್ನು ರಕ್ಷಿಸಿದ ಘಟನೆ ನಡೆದಿದೆ. ಬಂಧಿತರು ಸ್ಪಾ ಮ್ಯಾನೇಜರ್ ನವೀನ್ (26) ಮತ್ತು ಸಹಾಯಕ ಭರತ್ ಸಿಂಗ್ (27) ಎಂದು ತಿಳಿದು ಬಂದಿದೆ. ಸ್ಪಾ ಮಾಲೀಕ ಭೀಮಾ ನಾಯಕ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಶೋಧ ನಡೆಸಲಾಗಿದೆ. ಇನ್ನೂ ದಾಳಿ ವೇಳೆ ದೆಹಲಿ, ಪಶ್ಚಿಮ ಬಂಗಾಳ, ಅಸ್ಸಾಂ . ಥೈಲ್ಯಾಂಡ್ ಮೂಲದ ಆರು ಮಂದಿ ಮಹಿಳೆಯರನ್ನು ರಕ್ಷಿಸಿದ್ದಾರೆ. …
Read More »ಶ್ರೀ ಗ್ರಾಮ ದೇವತೆ (ದ್ಯಾಮವ್ವ) ದೇವಿಯ ನೂತನ ದೇವಸ್ಥಾನದ ಉದ್ಘಾಟನೆ- ಕಳಸಾರೋಹಣ
ಘಟಪ್ರಭಾ: ಸಮೀಪದ ಶಿಂದಿಕುರಬೇಟ ಗ್ರಾಮದ ಶ್ರೀ ಗ್ರಾಮ ದೇವತೆ (ದ್ಯಾಮವ್ವ) ದೇವಿಯ ನೂತನ ದೇವಸ್ಥಾನದ ಉದ್ಘಾಟನಾ ಸಮಾರಂಭ ಹಾಗೂ ಕಳಸಾರೋಹಣ ಕಾರ್ಯಕ್ರಮವು ದಿ.13 ಮತ್ತು 14 ರಂದು ಎರಡು ದಿನಗಳವರೆಗೆ ಜರುಗಲಿದೆ. ದಿ.13 ರಂದು ಬೆಳಿಗ್ಗೆ ಬ್ರಾಹ್ಮೀ ಮೂಹೂರ್ತದಲ್ಲಿ ನೂತನ ದೇವಾಲಯದಲ್ಲಿ ಗೋಮಾತೆ ಗೃಹ ಪ್ರವೇಶ, ನವಗ್ರಹ ಶಾಂತಿ ಗಾಯತ್ರಿ ಹೋಮ ಜರುಗಲಿದ್ದು, ಸಂಜೆ 4 ಗಂಟೆಗೆ ಶ್ರೀ ಪರಮೇಶ್ವರ ಗುಡಿಯಿಂದ ಶ್ರೀ ಗ್ರಾಮದೇವತೆಯ (ದ್ಯಾಮವ್ವ) ದೇವಸ್ಥಾನದವರೆಗೆ ಕಳಶವನ್ನು ಹಾಗೂ ವಾದ್ಯಮೇಳದೊಂದಿಗೆ ಉತ್ಸವದಿಂದ ತರಲಾಗುತ್ತದೆ. ಸಂಜೆ ಮಹಾಪ್ರಸಾದ ಜರುಗಲಿದೆ. ದಿ.14ರಂದು ಬೆಳಿಗ್ಗೆ ಬ್ರಾಹ್ಮೀ ಮೂಹೂರ್ತದಲ್ಲಿ …
Read More »