*ಪಿಡಬ್ಲ್ಯೂ ಡಿ ಜಮೀನು ಗುಳುಂ ಪ್ರಕರಣ ತನಿಖೆಗೆ ಸಿಪಿಐ ಆರ್ ಆರ್ ಪಾಟೀಲ್ ಸ್ಥಳಕ್ಕೆ ಭೇಟಿ ಪರಿಶೀಲನೆ*

Share The News

ಚಿಕ್ಕೋಡಿ: ಪಿಡಬ್ಲ್ಯೂ ಡಿ ಜಮೀನು ಗುಳುಂ ಪ್ರಕರಣ ತನಿಖೆಗೆ ಸಿಪಿಐ ಆರ್ ಆರ್ ಪಾಟೀಲ್ ಸ್ಥಳಕ್ಕೆ ಭೇಟಿ ಪರಿಶೀಲನೆ. ಅಕ್ರಮ ಸರಕಾರಿ ಜಮೀನು ಉತಾರ ಮಾಡಿರುವ ಆರೋಪ ಹಿನ್ನಲೆ ಮೇಲಾಧಿಕಾರಿಗಳು ತನಿಖೆ ಮಾಡಬೇಕೆಂದು ಮೇಲಾಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅನ್ಯಾಯವಾದ ಕುಟುಂಬಕ್ಕೆ ನ್ಯಾಯ ಕೊಡಿಸುವ ಹಾಗೆ ಮಾಡಿ ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಕುರಿತು ವಿಡಿಯೋನಲ್ಲಿ ಹೊಡಿಬಡಿ ಮಾಡಿರುವ 150 ಜನರ ಗುಂಪು ಯಾವೂರದು ಅವರ ವಿರುದ್ಧ ಎಫ್ ಐ ಆರ್ ದಾಖಲಿಸಬೇಕೆಂದು ಮೇಲಧಿಕಾರಿಗಳಿಗೆ ಭೇಟಿ ನೀಡಿದ ಹಿನ್ನಲೆ ಸ್ಥಳಕ್ಕೆ ಭೇಟಿ ನೀಡಿ ಪಿಡಬ್ಲ್ಯುಡಿ ಇಲಾಖೆಗೆ ಸಂಬಂಧಿಸಿದ ಜಮೀನನ್ನು ಸರ್ಕಾರಕ್ಕೆ ಒಪ್ಪಿಸುವ ಕೆಲಸವನ್ನು ದಿಡೀರನೆ ಮಾಡಬೇಕೆಂದು ಸಣ್ಣರಾಮ ಪುಕಾಟೆ ಯವರು ಪತ್ರಿಕೆ ಮುಖಾಂತರ ಅಧಿಕಾರಿಗಳಿಗೆ ಬೇಡಿಕೊಂಡಿದ್ದರು ಮಾನ್ಯ ಜಿಲ್ಲಾಧಿಕಾರಿಗಳು ಕೂಡ ಸರ್ಕಾರಿ ಜಮೀನನ್ನು ಆಕ್ರಮಣ ಮಾಡಿರುವವರ ವಿರುದ್ಧ ಪ್ರಕರಣ ದಾಖಲಿಸುವಂತೆ ಮನವಿ ಮಾಡಿಕೊಂಡಿದ್ದರು.

ಜಾಗನೂರ ಗ್ರಾಮಕ್ಕೆ ಭೇಟಿ ನೀಡಿದ ಸಿಪಿಐ ಇವರು ಖುದ್ದಾಗಿ ನೊಂದವರಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು. ಜಖಂಗೊಂಡ ಮನೆ ಹೊಲ ನೋಡಿದರು.ಆಡು ಕುರಿ ಹೋತ್ ಕಳುವಾದ್ ಸಾಮಾನುಗಳು ಎಲ್ಲಿವೆ ಕಳೆದು ಹೋದ ಮೊಬೈಲ್ ಎಲ್ಲಿದೆ ತಪಾಸಣೆ ಮಾಡಿದರು. ನೊಂದವರು ಸಿಪಿಐ ಪಾಟೀಲರ ಮುಂದೆ ಕಣ್ಣೀರು ಹಾಕಿ ನ್ಯಾಯ ಕೊಡಿಸಿ ಎಂದು ಅಳಲು ತೋಡಿಕೊಂಡರು.ಇನ್ನು ತನಿಖೆ ಶುರುವಾಗಿದ್ದು ನ್ಯಾಯ ಅನ್ಯಾಯ ಹೊರಬೀಳಲಿದೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.


Share The News

Leave a Reply

Your email address will not be published. Required fields are marked *

error: Content is protected !!