*ಬಾಳೆ ಹಣ್ಣು ಮಾರುತ್ತಿದ್ದ ಮಹಿಳೆ ಮೇಲೆ ಆಸಿಡ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸೆರೆ*

Share The News

ಬೆಳಗಾವಿ-ಬಾಳೆ ಹಣ್ಣು ಮಾರುತ್ತಿದ್ದ ಮಹಿಳೆಯ ಮೇಲೆ,ಅಸೀಡ್ ದಾಳಿ ನಡೆದಿದ್ದು,ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ರಾಯಬಾಗ ಪಟ್ಟಣದಲ್ಲಿ ಸಂಜೆ 7 ಗಂಟೆಗೆ ನಡೆದಿದೆ.

ರಾಯಬಾಗ ಪಟ್ಟಣದ ಶಾಹು ಮಹಾರಾಜ ವೃತ್ತದ ಬಳಿ ಬಾಳೆ ಹಣ್ಣು ಮಾರುತ್ತಿದ್ದ ಮಹಿಳೆ ಪಟ್ಟಣದ ಯಾಸ್ಮೀನ ತಹಸೀಲ್ದಾರ (35) ಅಸೀಡ್ ದಾಳಿಗೆ ತುತ್ತಾದ ಮಹಿಳೆ ಘಟನೆ ನಡೆದ ತಕ್ಷಣ ಪೋಲೀಸರು ಸ್ಥಳಕ್ಕೆ ಧಾವಿಸಿ ಅಸೀಡ್ ದಾಳಿಗೆ ತುತ್ತಾದ ಮಹಿಳೆಯನ್ನು ಸ್ಥಳೀಯರು ನೀರು ಸಿಂಪಡಿಸಿ.ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ.ಸ್ಥಳೀಯ ವೈದ್ಯರ ಶಿಫಾರಸಿನ ಮೇರೆಗೆ ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಸೀಡ್ ದಾಳಿ ನಡೆದ ಒಂದು ಗಂಟೆಯ ಬಳಿಕ ಆರೋಪಿ,ಸ್ಥಳೀಯ ಪೋಲೀಸ್ ಠಾಣೆಗೆ ಶರಣಾಗಿ ಅಸೀಡ್ ದಾಳಿಯನ್ನು ನಾನೇ ಮಾಡಿದ್ದೇನೆ ಎಂದು ಒಪ್ಪಿಕೊಂಡು ತಾನು ವಿಷ ಸೇವಿಸಿರುವದಾಗಿ ಪೋಲೀಸರ ಬಳಿ ಹೇಳಿದ್ದರಿಂದ,ಆರೋಪಿಯನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಆತನನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಅಸೀಡ್ ದಾಳಿ ಮಾಡಿರುವದಾಗಿ ಹೇಳಿಕೊಂಡು, ಪೋಲೀಸ್ ಠಾಣೆಗೆ ಹಾಜರಾಗಿ,ಪೋಲೀಸರ ಬಳಿ ವಿಷ ಸೇವನೆ ಮಾಡಿರುವದಾಗಿ ಹೇಳಿಕೊಂಡಿರುವ ಆರೋಪಿ ಅಣ್ಣಪ್ಪಾ ಶೇಟ್ ಎಂಬಾತ ಈಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.


Share The News

Leave a Reply

Your email address will not be published. Required fields are marked *

error: Content is protected !!